og
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121wp-post-author
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121ಮೋದಿ ಯುಗ್ ಉತ್ಸವದ ಪುಸ್ತಕವನ್ನು ಮಾನ್ಯ ಶಾಸಕರು ದೆಹಲಿಗೆ ತೆರಳಿ ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಕರ್ನಾಟಕ ಭಾಜಪಾ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವಾರು ಪಕ್ಷದ ಮುಖಂಡರು ಹಾಗೂ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ನೀಡಿದ್ದರು.
ಕಳೆದ 2 ದಿನಗಳಿಂದ ಬಿಜೆಪಿ ರಾಜ್ಯ ಕಾರ್ಯಕಾರಣಿಯು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದು ನಿನ್ನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನ ಕಾರ್ಯಗಳ ಬಗ್ಗೆ ಶಾಸಕರನ್ನು, ಸಚಿವರನ್ನು ಕುರಿತು ಮಾತನಾಡುವಾಗ ನಾನು ನೋಡಿದ್ದೇನೆ ಇಲ್ಲಿ ಮೈಸೂರಿನ ಶಾಸಕರಾದ ರಾಮದಾಸ್ ಜಿ ಕುಳಿತಿದ್ದಾರೆ ಅವರ ಕ್ಷೇತ್ರದಲ್ಲಿ ಕ್ಯಾಂಪ್ ಗಳನ್ನು ಮಾಡಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಆರ್.ಅಶೋಕ್, ಡಾ.ಸುಧಾಕರ್ ಎಲ್ಲರೂ ಅಲ್ಲಿಗೆ ಹೋಗಿ ನೋಡಿದ್ದಾರೆ ಒಂದೊಂದೂ ಯೋಜನೆಗಳ ಅನುಷ್ಠಾನದ ಬಗ್ಗೆ ಒಂದು ಪುಸ್ತಕವನ್ನೂ ಸಹ ಅವರು ಮಾಡಿದ್ದಾರೆ ಅವರಿಗೆ ಎಲ್ಲರೂ ಸೇರಿ ಚಪ್ಪಾಳೆ ಬಡಿಯಿರಿ, ಅವರು ಶಾಸಕರಾಗಿ ಆದಿವಾಸಿಗಳಿಗೆ, ಬಡವರಿಗೆ ಯೋಜನೆಗಳ ಅನುಷ್ಠಾನವನ್ನು ಮಾಡಿದ್ದಾರೆ. ನೀವುಗಳೂ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಕ್ಯಾOಪ್ ಹಾಕಿಕೊಂಡು ಈ ರೀತಿ ಯೋಜನೆಗಳ ಅನುಷ್ಠಾನ ಮಾಡಿಸಿ ಮನೆ ಮನೆಗೆ ತೆರಳಿ ಇದು ಮೋದಿಜಿ ಸರ್ಕಾರದ ಯೋಜನೆ, ಇದು ಬೊಮ್ಮಾಯಿ ಸರ್ಕಾರದ ಯೋಜನೆ ಎಂದು ತಿಳಿ ಹೇಳುವ ಕೆಲಸ ಮಾಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾನ್ಯ ಶಾಸಕರು ಶ್ರೀಯುತ ಅರುಣ್ ಸಿಂಗ್ ಜಿ ಅವರ ಈ ಪ್ರಶಂಸೆಯ ಮಾತುಗಳು ನನಗೆ ಕೆಲಸ ಮಾಡಲು ಮತ್ತಷ್ಟು ಹುರುಪು ಬಂದಂತಾಗಿದೆ. ಕ್ಷೇತ್ರದಲ್ಲಿ ಈ ಮಟ್ಟಿಗೆ ಯೋಜನೆ ಅನುಷ್ಠಾನ ಆಗುತ್ತಿದೆ ಅಂದರೆ ಅದರ ಹಿಂದೆ ನಮ್ಮ ಕಾರ್ಯಕರ್ತರ ಹಾಗೂ ಅಧಿಕಾರಿಗಳ ಶ್ರಮ ಹೇಳತೀರದು, ಅವರಿಗೆ ಈ ಸಂದರ್ಭದಲ್ಲಿ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸಂಘಟನೆ ಹಾಗೂ ಸರ್ಕಾರ ಜೊತೆ ಗೂಡಿ ಕ್ಷೇತ್ರದ ಜನತೆಗೆ ಸರ್ಕಾರಿ ಯೋಜನೆಗಳನ್ನು ತಲುಪಿಸುವಲ್ಲಿ ಕ್ಷೇತ್ರವನ್ನು ನಂ.1 ಮಾಡುವತ್ತ ನಾವು ಹೆಜ್ಜೆ ಇಡುತ್ತಿದ್ದೇವೆ ಎಂದರು.
]]>ವಿಶೇಷವಾಗಿ ಹೆಣ್ಣುಮಕ್ಕಳು ಈ ವೃತ್ತಿಗೆ ಇಳಿಯಲಿಕ್ಕೆ ಆರೋಗ್ಯದ ದೃಷ್ಟಿಯಿಂದ ಜಾಗೃತಿ ಕೊಡುವಂತದ್ದು ಎರಡನೆಯದಾಗಿ msm ನ ಸಂಖ್ಯೆ ಹೆಚ್ಚಾಗುತ್ತಿದೆ. ಪುಟ್ಟ ಪುಟ್ಟ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಈ ಸಮಸ್ಯೆ ಹೆಚ್ಚಾಗುತ್ತಿದೆ ಈ ಸಮಸ್ಯೆಯಿಂದ ಹೊರಬರಲು ವಿಶೇಷವಾಗಿ ಜಾಗೃತಿ ನಿರ್ಮಾಣ ಮಾಡುವುದು ಹಾಗೂ ಆರೋಗ್ಯದ ದೃಷ್ಟಿಯಿಂದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು, ಮತ್ತೆ ಮುಂದೆ ಮಕ್ಕಳುಗಳು ಈ ರೀತಿ ಚಟಕ್ಕೆ ಬಲಿಯಾಗದೆ ಇರುವ ರೀತಿಯಲ್ಲಿ ಶಾಲಾ ಮಟ್ಟದಲ್ಲಿಯೇ ಒಂದು ಕೌನ್ಸೆಲಿಂಗ್ ಅನ್ನು ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಿತು.
ಈಗ ಮಕ್ಕಳುಗಳಲ್ಲಿ HIV ನಿಯಂತ್ರಣ ಮಾಡುವ ವಿಧಾನ ಇದ್ದರೂ ಕೂಡಾ ಮಕ್ಕಳಲ್ಲಿ 0.27 ಇದೆ ಅದನ್ನು ಶೂನ್ಯಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ಚರ್ಚಿಸಲಾಯಿತು. ಸರಿಯಾದ ಉದ್ಯೋಗ ಅವಕಾಶಗಳು ಇಲ್ಲದ ಕಾರಣ HIV ಸೋಂಕು ಇದ್ದರೂ ಕೂಡಾ ಅವರು ಸೆಕ್ಸ್ ವರ್ಕರ್ಸ್ ಆಗಿ ಭಾಗಿಯಾಗುತ್ತಾರೆ ಇವರಿಗೂ ಕೂಡಾ ಒಂದು ಪಿಂಚಣಿ ಸೌಲಭವನ್ನು ಜಾರಿ ತರಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಬೇಕೆಂದು ನಿರ್ಧರಿಸಲಾಯಿತು.
ಮಕ್ಕಳಲ್ಲಿ ಸ್ಯಾಮ್, ಮ್ಯಾಮ್ ಇರುವ ಕಾರಣ ಅಂತಹ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮವನ್ನು ಸರ್ಕಾರದಿಂದಲೇ ಜಾರಿ ಮಾಡಬೇಕು ಹಾಗೂ ಅಂತಹ ಮಕ್ಕಳನ್ನು ಉಳಿಸಿಕೊಳ್ಳುವ ಯೋಜನೆಯನ್ನು ಸರ್ಕಾರ ಮಾಡಬೇಕಾಗಿದೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಈ ರೀತಿಯಾದಂತಹ ಕೆಟ್ಟ ಪದ್ಧತಿ ಮೂಲಕ ಸಣ್ಣ ವಯಸ್ಸಿನ ಮಕ್ಕಳು ಅಡ್ಡ ದಾರಿ ಹಿಡಿಯುತ್ತಿರುವುದು ಶೋಚನೀಯ, ಇದನ್ನು ತಡೆಯಲು ಸರ್ಕಾರದೊಂದಿಗೆ NGO ಹಾಗೂ ಸಮಾಜದ ಜವಾಬ್ದಾರಿ ಇದೆ. MSM ಜೊತೆಯಲ್ಲೇ ಯುವ ಜನಾಂಗ ಡ್ರಗ್, ಮಧ್ಯಪಾನದಿಂದ ದೂರವಿಡಲು ಒಂದು ನಿಯಮ ತರುವ ಅವಶ್ಯಕತೆ ಇದೆ, ಗೊತ್ತೋ ಗೊತ್ತಿಲ್ಲದೆಯೂ ಅಡಲ್ಟ್ ಆಗಿರುವ MSM ಗಳನ್ನು ದಾರಿ ತಪ್ಪಿಸುತ್ತಿರುವುದು ಕಂಡು ಬಂದಿದೆ, ಈಗಾಗಲೇ 40 ಶಾಲೆಗಳಲ್ಲಿ ನಡೆಸಿರುವ ಸರ್ವೇಯ ಪ್ರಕಾರ ಇದರ ಸಂಖ್ಯೆ ಹೆಚ್ಚುತ್ತಿರುವುದು ಕಂಡು ಬಂದಿದೆ.
ಹೆಚ್ ಐ ವಿ ಇರುವ ಮಕ್ಕಳಿಗೆ ಮಹಾರಾಷ್ಟ್ರ ಸರ್ಕಾರದಂತೆ ಒಂದು ಪ್ರೋತ್ಸಾಹ ಧನದ ರೀತಿಯಲ್ಲಿ ನೀಡಿದರೆ ಬದುಕಲು ಸಹಾಯವಾಗುತ್ತದೆ, ಅಲ್ಲದೇ ಅವರಿಗೆ ಒಂದು ಮಟ್ಟದ ಶಿಕ್ಷಣ ದೊರಕುತ್ತಿದ್ದು ಹೆಚ್ಚಿನ ಶಿಕ್ಷಣಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸುವುದರ ಜೊತೆಯಲ್ಲಿ ಕೌಶಲ್ಯವನ್ನೂ ನೀಡುವ ಮೂಲಕ ಸರ್ಕಾರದ ಮುಖ್ಯವಾಹಿನಿಗೆ ತರುವ ದೊಡ್ಡ ಜವಾಬ್ದಾರಿ ನಮ್ಮದಿದೆ. ಇವೆಲ್ಲಾ ಮುಖ್ಯವಾದ ಕ್ರಮಗಳನ್ನು ತೆಗೆದುಕೊಂಡು 10 ವರ್ಷಗಳ ಗುರಿಯೊಂದಿಗೆ 2030 ರ ಒಳಗೆ ಹೆಚ್ ಐ ವಿ ಸೋಂಕು ಮಕ್ಕಳಿಗೆ ತಗುಲದಂತೆ ನೋಡಿಕೊಳ್ಳಬೇಕು.
ಸದರಿ ವಿಷಯವನ್ನು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಇವೆಲ್ಲರ ಜೊತೆಯಲ್ಲಿ ಒಂದು ಸಂಯುಕ್ತವಾಗಿ ಸಮಾಲೋಚನೆ ಮಾಡಿ ವರದಿಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವ ಅಗತ್ಯವಿದೆ ಅಲ್ಲದೇ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಗೆ ವರದಿಯನ್ನು ಸಲ್ಲಿಸಲಿದ್ದೇವೆ.
ಈ ಸಮಯದಲ್ಲಿ ಜಿಲ್ಲಾ ಸರ್ಜನ್ ಡಾ.ಸುಧಾಕರ್, ಆರ್.ಎಂ.ಓ ಡಾ.ಕೇಶವ್, ಮೆಡಿಕಲ್ ಆಫೀಸರ್, ಹೆಚ್ ಐ ವಿ ಸೋಂಕಿತರ ಕೌನ್ಸಿಲರ್ ರತ್ನ , ಡಾ.ವೀರೇಶ್, MSM ಪ್ರತಿನಿಧಿ ಗಣೇಶ್, ಸ್ಪಂದನಾ ನೆಟ್ವರ್ಕ್ ನ ಕಸ್ತೂರಿ, ಹಾಗೂ ಎ.ಆರ್.ಟಿ ಸೆಂಟರ್ ನ ಕಚೇರಿ ಸಿಬ್ಬಂದಿ ಹಾಜರಿದ್ದರು.
]]>ಅಧ್ಯಕ್ಷೀಯ ಭಾಷಣವನ್ನು ಮಾಡಿದ ಮಾನ್ಯ ಭಾಜಪಾ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ರಾಜಕಾರಣದಲ್ಲಿ ಆತ್ಮ ಬಿ.ಎಲ್.ಎ 2 ಆಗಿದೆ, ರಾಮದಾಸ್ ಅವರು ಮಾತು ಕಡಿಮೆ ಮಾಡಿ ಕೆಲಸ ಹೆಚ್ಚು ಮಾಡಿ ಬಿ.ಎಲ್.ಎ. 2 ಗಳ ನೇಮಕ ಮಾಡಿದ್ದಾರೆ. ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ರಾಜ್ಯ ಅಧ್ಯಕ್ಷರ ಮನೆ ಯಿಂದ ಪಾರ್ಟಿ ಬೆಳೆಯುವುದಿಲ್ಲ, ಪಾರ್ಟಿ ಬೆಳೆಯುವುದು ಕಾರ್ಯಕರ್ತರಿಂದ. ಒಂದು ಕಾಲದಲ್ಲಿ ಅಭ್ಯರ್ಥಿಗಳನ್ನು ಹುಡುಕುತ್ತಿದ್ದೇವೆ.
ಕೆ.ಆರ್ ಕ್ಷೇತ್ರದಲ್ಲಿ 11 ಸಾವಿರ ಪೇಜ್ ಪ್ರಮುಖರ ನೇಮಕವಾಗಿದೆ ಮನೆ ಮನೆಯಲ್ಲಿ ಕೆ.ಆರ್ ಕ್ಷೇತ್ರದಲ್ಲಿ ಪಾರ್ಟಿ ಬಹಳ ಸಂಘಟನಾತ್ಮಕವಾಗಿ ಇದೆ. ಕಾಂಗ್ರೆಸ್ ಇಂದು ದೇಶದಲ್ಲಿ ವಿನಾಶದ ಅಂಚಿನಲ್ಲಿದೆ ಆದರೆ ಮನೆ ಮನೆಯಲ್ಲಿ ಕಮಲ ಅರಳುತ್ತಿದೆ. ಕೆ.ಆರ್ ಕ್ಷೇತ್ರವನ್ನು ನೋಡಿ ನಾನು ಹೇಳುತ್ತೇನೆ ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಭಾಜಪಾ ಕ್ಕೆ ವಿನಾಶವೇ ಇಲ್ಲ ಎಂದು. ಇಂದು ಭಾಜಪಾ ಸುಭದ್ರವಾಗಿದೆ ಎಂದರೆ ಅದಕ್ಕೆ ನಮ್ಮ ಕಾರ್ಯ ಪದ್ಧತಿಯೇ ಕಾರಣ. ಸಿದ್ದರಾಮಯ್ಯನವರಿಗೆ ನಾನು ಹೇಳುತ್ತೇನೆ ನಿಮ್ಮ ಊರಿನ ಹತ್ತಿರವೇ ಇರುವ ಕೆ.ಆರ್ ಕ್ಷೇತ್ರಕ್ಕೆ ಬಂದು ನೋಡಿ ಹೇಗೆ ಪಾರ್ಟಿ ಕಟ್ಟಿದ್ದಾರೆ ಎಂದು, ನಿಮಗೆ ಸಾಧ್ಯವಾದರೆ ನಿಮ್ಮ ಒಂದು ಬೂತ್ ನಲ್ಲಿ ಈ ರೀತಿ ಪಾರ್ಟಿಯನ್ನ ಕಟ್ಟಿ. ನಾವು ಮತಗಟ್ಟೆಯನ್ನು ನೆಂಬಿದ್ದೇವೆ, ಆದರೆ ಕಾಂಗ್ರೆಸ್ ಬರೀ ರಾಜಕಾರಣವನ್ನು ನಂಬಿದ್ದಾರೆ.
ಶಾಸಕರಾದ ರಾಮದಾಸ್ ಅವರ ಮನೆ ಮುಂದೆ ನಾಮಫಲಕ ಹಾಕುವ ಕಾರ್ಯ ಇಂದು ಇಡೀ ರಾಜ್ಯದಲ್ಲಿ ವಿಸ್ತಾರ ಆಗಿದೆ. ಬಿ.ಎಲ್.ಎ – 2 ಪಾರ್ಟಿ ಮತ್ತು ಸರ್ಕಾರದ ಕೊಂಡಿಗಳು ನೀವು ಅತ್ಯಂತ ಶ್ರೇಷ್ಠ ಕಾರ್ಯ ಮಾಡುತ್ತಿದ್ದೀರಿ, ನಿಜಕ್ಕೂ ನೀವು ಪುಣ್ಯವಂತರು. ರಾಜ್ಯದ ಎಲ್ಲಾ 80% ನಷ್ಟು ಬೂತ್ಗಳಲ್ಲಿ ಪಂಚ ರತ್ನ ಪೂರ್ಣವಾಗಿದೆ, ಪೇಜ್ ಪ್ರಮುಖರು ಆಯ್ಕೆಯಾಗಿದ್ದಾರೆ ಇದು ನಮ್ಮ ಭಾಜಪಾದ ಶಕ್ತಿ. ರಾಜ್ಯದಲ್ಲಿ ಮೊದಲ ಬಾರಿಗೆ ಬೂತ್ ಅಧ್ಯಕ್ಷರ ಕಾರ್ಯಾಗಾರ, ಪೇಜ್ ಪ್ರಮುಖರ ಕಾರ್ಯಾಗಾರ, ಬೂತ್ ಅಧ್ಯಕ್ಷರ ಮನೆ ಮುಂದೆ ನಾಮಫಲಕ ಅಳವಡಿಸುವ ಕಾರ್ಯ ಪ್ರಪ್ರಥಮವಾಗಿ ಮಾಡಿದ್ದು ಕೆ.ಆರ್ ಕ್ಷೇತ್ರದಲ್ಲಿ. ನಾವು ಸಂಘಟನಾತ್ಮಕವಾಗಿ ಇನ್ನಷ್ಟು ಕಾರ್ಯಪ್ರವೃತ್ತವಾಗಬೇಕಿದೆ. ರಾಷ್ಟ್ರದಲ್ಲಿ ಇನ್ನೊಂದು ಮಾದರಿಯನ್ನು ಕೆ.ಆರ್ ಕ್ಷೇತ್ರದಲ್ಲಿ ಮಾಡಲಾಗಿದೆ ಅದೇ ಕ್ಷೇತ್ರದ 18 ರಿಂದ 25 ವರ್ಷಗಳವರೆಗಿನ ಯುವ ಜನತೆಯನ್ನು ಕರೆದು ರಾಷ್ಟ್ರೀಯತೆಯ ಬಗ್ಗೆ ಚಿಂತನೆಯನ್ನು ತುಂಬುವ ಪ್ರಯೋಗ ಮಾಡಿದ್ದಾರೆ ಇದು ನಿಜಕ್ಕೂ ಪ್ರಶಂಸನೀಯ ಹಾಗೂ ರಾಷ್ಟ್ರಮಟ್ಟದಲ್ಲಿಯೇ ಒಂದು ವಿನೂತನವಾದ ಕಾರ್ಯ.
ರಾಮದಾಸ್ ಅವರ ನೇತೃತ್ವದಲ್ಲಿ ಪಾರ್ಟಿಯನ್ನು ಅದ್ಭುತವಾಗಿ ಕೆ.ಆರ್ ಕ್ಷೇತ್ರದಲ್ಲಿ ಕಟ್ಟಿದ್ದಾರೆ. ಬೂತ್ ಅಧ್ಯಕ್ಷರಾಗಿದ್ದ ಅಮಿತ್ ಶಾ ಭಾಜಪಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು, ಬೂತ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ವೆಂಕಯ್ಯ ನಾಯ್ಡು ಅವರು ಇಂದು ರಾಷ್ಟ್ರದ ಉಪರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅಂತಹ ಶಕ್ತಿ ಭಾಜಪಾಕ್ಕೆ ಇದೆ. ರಾಮದಾಸ್ ಅವರ ನೇತೃತ್ವದಲ್ಲಿ ಕೆ.ಆರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಘಟನಾತ್ಮಕ ಈ ಮಾದರಿ ಕಾರ್ಯಗಳು ರಾಜ್ಯಕ್ಕೆ ಲಾಭ ಸಿಗಲಿ ಎಂದು ಆಶಿಸುತ್ತೇನೆ ಎಂದರು.
]]>ಕೆ.ಆರ್.ಕ್ಷೇತ್ರದಲ್ಲಿ ಬೂತ್ ಅಧ್ಯಕ್ಷರ ಮನೆ ಮುಂದೆ ಬಂದು ಪೇಜ್ ಪ್ರಮುಖರನ್ನು ಆಯ್ಕೆ ಮಾಡುವ ಪ್ರಕ್ರಿಯೆ ರಾಜ್ಯದಲ್ಲಿ ಸಂಘಟನೆ ದೃಷ್ಟಿಯಿಂದ ಬಹು ವಿಶೇಷವಾಗಿದೆ. ಪೇಜ್ ಪ್ರಮುಖರ ಕಾರ್ಯ ಬರಿಯ ಚುನಾವಣಾ ದೃಷ್ಠಿಯಿಂದ ಮಾತ್ರ ಅಲ್ಲ ತಮ್ಮ ಪೇಜ್ ನಲ್ಲಿ ಬರುವ 8,10 ಮನೆಗಳ ಯೋಗಕ್ಷೇಮ ವಿಚಾರಿಸುವ ಕಾರ್ಯವೂ ಅವರದ್ದಾಗಿರುತ್ತದೆ. ನೀವು ಮಾಡುವಂತಹ ಈ ಪುಣ್ಯ ಕಾರ್ಯ ನಿಮ್ಮ ಕುಟುಂಬವನ್ನು ಕಾಯುತ್ತದೆ. ಪ್ರಧಾನಿ ಮೋದಿಜಿ ಅವರು ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ, ಅದನ್ನು ಅನುಷ್ಠಾನ ಮಾಡುವ ಜವಾಬ್ದಾರಿ ಪೇಜ್ ಪ್ರಮುಖರದಾಗಿರುತ್ತದೆ. ಇಂತಹ ಯೋಜನೆಗಳನ್ನು ನಾವು ಜನಕ್ಕೆ ತಲುಪಿಸಿದಾಗ ಅವರಿಗಾದ ಆನಂದ ಹೇಳತೀರದು. ಮುಂದಿನ ದಿನಗಳಲ್ಲಿ ಪೇಜ್ ಪ್ರಮುಖರಿಗೆ ಸರ್ಕಾರಿ ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರತಿ ವಾರ್ಡ್ ನಲ್ಲೂ ಟ್ರೈನಿಂಗ್ ನೀಡುವ ಕೆಲಸ ಮಾಡುತ್ತೇವೆ, 15 ನೆ ತಾರೀಖು ಸ್ವಾತಂತ್ರ್ಯ ದಿನ, ಅಂದಿನ ದಿನದಂದು ಬೂತ್ ಅಧ್ಯಕ್ಷರು ತಮ್ಮ ಮನೆಯ ಮುಂದೆ ಧ್ವಜಾರೋಹಣ ಮಾಡಿ ಹಬ್ಬದ ರೀತಿ ಆಚರಿಸಬೇಕು. ಇದು ಎಲ್ಲರೂ ಸೇರಿ ಮಾಡುವಂಥಹ ಸಮಾಜದ ಕೆಲಸವಾಗಿದೆ ಎಂದರು.
ವಿಶೇಷವಾಗಿ ಹೋದ ಬೂತ್ ನಲ್ಲಿ ಸ್ಥಳೀಯ ನಾಗರೀಕರೂ ಈ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದರು ಅಲ್ಲದೇ ನಾವೂ ನಿಮ್ಮೊಂದಿಗೆ ಇದ್ದೇವೆ ಎನ್ನುವ ಸಂದೇಶವನ್ನು ಕೊಟ್ಟರು. ಹಲವಾರು ಹಿರಿಯ ನಾಗರೀಕರು ಮಂತ್ರಿ ಸ್ಥಾನ ಸಿಗದೇ ಇದ್ದದ್ದು ಬೇಜಾರಾಗಿದೆ, ಮುಂದೆ ಆ ದೇವರು ಒಳ್ಳೆ ರೀತಿಯ ಆಶೀರ್ವಾದ ಮಾಡುತ್ತಾನೆ ಎಂದು ಶುಭ ಹಾರೈಕೆಗಳ ಸುರಿಮಳೆಯನ್ನೇ ಸುರಿಸಿದರು.
]]>ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಪ್ರಧಾನಿ ನರೇಂದ್ರ ಮೋದಿಜಿ ಸರ್ಕಾರದ ಯೋಜನೆಗಳನ್ನು ಹಾಗೂ ರಾಜ್ಯ ಸರ್ಕಾರದ ಯೋಜನಲೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಹಾಗೂ ಜವಾಬ್ದಾರಿ ಬೂತ್ ಅಧ್ಯಕ್ಷ ಹಾಗೂ ಪೇಜ್ ಪ್ರಮುಖರದ್ದು. ಬರೀ ಚುನಾವಣಾ ದೃಷ್ಠಿಯಿಂದ ಮಾತ್ರ ಬಿಜೆಪಿ ಕಾರ್ಯಕರ್ತರಾದ ನಾವು ಕೆಲಸ ಮಾಡಬಾರದು, ನಮ್ಮ ಕೆಲಸ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವಂತಿರಬೇಕು.
ಬಿಜೆಪಿಯಲ್ಲಿ ಬೂತ್ ಅಧ್ಯಕ್ಷರ ಜವಾಬ್ದಾರಿ ಅತೀ ಮುಖ್ಯವಾದದ್ದು. ಮನೆಯ ಜವಾಬ್ದಾರಿ ಇದ್ದರೂ ಸಹ ಸಮಾಜದ ಕೆಲಸ ಮಾಡಬೇಕು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಬೂತ್ ಅಧ್ಯಕ್ಷರು ಭಾಗಿಯಾಗುತ್ತಾರೆ ಇದು ಭಾಜಪಾದ ವಿಶೇಷತೆ. ಜನರ ಕಣ್ಣೀರನ್ನು ಒರೆಸುವ ಕಾರ್ಯ ಬೂತ್ ಅಧ್ಯಕ್ಷರದ್ದು. ಇವತ್ತು ದೇಶದಲ್ಲಿ ಮೋದಿಜಿ ಒಂದು ವಿಷಯವನ್ನು ಕೊಟ್ಟಿದ್ದಾರೆ, ಭ್ರಷ್ಟಾಚಾರ ಮುಕ್ತವಾಗಬೇಕು ಎಲ್ಲೆಡೆಯಲ್ಲಿ ಪಾರದರ್ಶಕ ಆಡಳಿತ ತರಬೇಕು ಎಂದು, ಅದೇ ನಿಟ್ಟಿನಲ್ಲಿ ಕೆ.ಆರ್ ಕ್ಷೇತ್ರವನ್ನೂ ಸಹ ಭ್ರಷ್ಟಾಚಾರ ಮುಕ್ತವಾಗಿಸಬೇಕು. ನೂರೊಂದು ಗಣಪತಿ ದೇವಸ್ಥಾನದಿಂದ ನಂಜುಮಳಿಗೆ ವರೆಗೆ ರಸ್ತೆ ಅಭಿವೃದ್ಧಿ ಗೆ 10 ಕೋಟಿ ರೂ ಗಳನ್ನು ಬಿಡುಗಡೆ ಮಾಡಿದ್ದೇವೆ.
ಕೃಷ್ಣರಾಜ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಸಂಕಲ್ಪಿಸೋಣ, ಬ್ರಷ್ಟಾಚಾರ ರಹಿತ ಕ್ಷೇತ್ರವನ್ನಾಗಿಸೋಣ. ನಮ್ಮ ಮನೆಯಲ್ಲಿರುವ ಮಕ್ಕಳಲ್ಲಿ ಸಮಾಜ ಸೇವೆಗೆ ಜೋಡಿಸುವ ಜವಬ್ದಾರಿ ನಮ್ಮೆಲರ ಮೇಲೆ ಇದೆ ಎಂದು ತಿಳಿಸಿದರು. ಬರುವ ದಿನಗಳಲ್ಲಿ ರಾಜ್ಯದಲ್ಲಿ ನಮ್ಮ ಕ್ಷೇತ್ರ ರಾಜ್ಯ ಮತ್ತು ಕೇಂದ್ರ ಯೋಜನೆಗಳ ಅನುಷ್ಠಾನ ಮಾಡಿಸುವಲ್ಲಿ ಮತ್ತು ಪಕ್ಷದ ಸಂಘಟನಾತ್ಮಕವಾಗಿ ಪ್ರಥಮವಾಗಿಸಲು ಶ್ರಮಿಸೋಣ ಎಂದರು.
]]>