Notice: Function _load_textdomain_just_in_time was called incorrectly. Translation loading for the og domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wp-post-author domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121
‘ಮಿಷನ್ ದಕ್ಷಿಣ್’ ಯೋಜನೆಯನ್ವಯ ಬಿಜೆಪಿ ಪ್ರಬಲಗೊಳಿಸಲು ಸಿದ್ಧತೆ – ಸಿ. ಟಿ. ರವಿ – I am BJP
May 6, 2025

‘ಮಿಷನ್ ದಕ್ಷಿಣ್’ ಯೋಜನೆಯನ್ವಯ ಬಿಜೆಪಿ ಪ್ರಬಲಗೊಳಿಸಲು ಸಿದ್ಧತೆ – ಸಿ. ಟಿ. ರವಿ

ಬೆಂಗಳೂರು: ‘ಮಿಷನ್ ದಕ್ಷಿಣ್’ ಯೋಜನೆಯನ್ವಯ ಜನಸಂಖ್ಯೆಯ ಶೇ 70ಕ್ಕೂ ಹೆಚ್ಚು ಇರುವ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ನಾವು ತಲುಪಬೇಕು. ಯಾವುದೇ ಜಾತಿಭೇದದ ತಾರತಮ್ಯವಿಲ್ಲದೆ ದೇಶದ ಉದ್ದಗಲಕ್ಕೆ ಬಡವರು, ದಲಿತರು, ಶೋಷಿತರು ಮತ್ತು ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಮಾಡಿದೆ. ಆ ಫಲಾನುಭವಿಗಳನ್ನು ಪಕ್ಷದ ಜೊತೆ ಜೋಡಿಸಿ ದಕ್ಷಿಣವೂ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಪ್ರಬಲವಾಗುವುದು ನಿಶ್ಚಿತ. ಈ ನಿಟ್ಟಿನಲ್ಲಿ ಮಿಷನ್ ದಕ್ಷಿಣ್ ಯೋಜನೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ವಿಷಯ ವ್ಯಕ್ತವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಿಳಿಸಿದರು.
ಬೆಂಗಳೂರಿನ “ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್”ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರು ಸ್ನೇಹಯಾತ್ರೆಯ ಕಲ್ಪನೆಯನ್ನು ಮುಂದಿಟ್ಟಿದ್ದಾರೆ. ಬಿಜೆಪಿ ವಿಚಾರ, ನಮ್ಮ ಸರಕಾರದ ಯೋಜನೆಗಳನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಮಾಡಬೇಕೆಂಬ ಸಂಕಲ್ಪವೂ ಸಭೆಯಲ್ಲಿ ವ್ಯಕ್ತವಾಗಿದೆ ಎಂದರು.

ಈಶಾನ್ಯದಲ್ಲಿ ಶೇ 90- 95ರಷ್ಟು ಅಲ್ಪಸಂಖ್ಯಾತರಿರುವ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಪಡೆದಿದೆ. ಅಲ್ಲಿನ ಜನಪ್ರತಿನಿಧಿಗಳನ್ನು ರಾಯಭಾರಿಗಳಾಗಿ ಬಳಸಿ ನಮ್ಮಿಂದ ದೂರ ಇರುವ ವರ್ಗವನ್ನು ತಲುಪಬೇಕೆಂಬ ಸಲಹೆ ವ್ಯಕ್ತವಾಗಿದೆ ಎಂದು ಅವರು ವಿವರಿಸಿದರು.

ಕೇಡರ್ ಲೀಡರ್ ವರ್ಸಸ್ ಪರಿವಾರವಾದದ ನಾಯಕತ್ವ
ಈ ದೇಶದಲ್ಲಿ ಧ್ರುವೀಕರಣದ ರಾಜಕಾರಣ ಇದೆ. ಒಂದು ಕಡೆ ಪ್ರಜಾಪ್ರಭುತ್ವದ ಪರ ಇರುವ ಕೇಡರ್‍ಗಳೇ ಲೀಡರ್ ಗಳಾಗಿ ಹೊರಹೊಮ್ಮಿದ ಬಿಜೆಪಿ ಇದೆ. ಇನ್ನೊಂದೆಡೆ ಪರಿವಾರವಾದದ ಮೂಸೆಯಿಂದ ಅಪ್ಪ, ಅಮ್ಮ, ಮುತ್ತಜ್ಜನ ಹೆಸರಿನೊಂದಿಗೆ ನಾಯಕತ್ವದ ಲೇಬಲ್ ಅನ್ನು ಸ್ವಯಂ ಅಂಟಿಸಿಕೊಂಡು ಅಧಿಕಾರ ನಮ್ಮ ಜನ್ಮಸಿದ್ಧ ಹಕ್ಕು ಎಂದು ಪರಿತಪಿಸುವ ರಾಜಕಾರಣ ಇದೆ. ತುಷ್ಟೀಕರಣದ ರಾಜಕೀಯ ಒಂದು ಕಡೆಗಿದ್ದರೆ, ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ (ಸಬ್ ಕಾ ಸಾಥ್ ಸಬ್ ಕಾವಿಕಾಸ್) ರಾಜಕಾರಣ ಇನ್ನೊಂದು ಕಡೆ ಇದೆ. ಜಾತಿವಾದದಡಿ ರಾಜಕೀಯದ ನೆಲಗಟ್ಟನ್ನು ಕಟ್ಟಿ ಆ ಮೂಲಕ ರಾಜಕೀಯದ ಕೋಟೆ ಕಟ್ಟುವ ಸ್ವಾರ್ಥದ ರಾಜಕೀಯ ಒಂದೆಡೆ ಇದ್ದರೆ, ರಾಷ್ಟ್ರವಾದದ ಹಿನ್ನೆಲೆಯಲ್ಲಿ ರಾಜಕಾರಣ ಮಾಡುವ ಬಿಜೆಪಿ ಇನ್ನೊಂದು ಕಡೆಗೆ ಇದೆ ಎಂದು ವಿಶ್ಲೇಷಿಸಿದರು.

ಬಿಜೆಪಿ ಬೆಳವಣಿಗೆಯಿಂದ ಪರಿವಾರವಾದಿಗಳು, ಜಾತಿವಾದಿಗಳು ಕಂಗೆಟ್ಟಿದ್ದಾರೆ. ಅವರೆಲ್ಲರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಾಲಕಾಲಕ್ಕೆ ಕೆಲವು ಮುಖವಾಡ ಹಾಕುತ್ತಾರೆ. ಜಾತ್ಯತೀತತೆಯೂ ಅವರ ಜಾತಿ ರಾಜಕಾರಣವನ್ನು ಮುಚ್ಚಿಕೊಳ್ಳುವ ಮುಖವಾಡ. ತುಷ್ಟೀಕರಣದ ಪರಾಕಾಷ್ಠೆ ಸೈನ್ಯದಲ್ಲೂ ಜಾತಿಯನ್ನು ಹುಡುಕುವ ಮಟ್ಟಕ್ಕೆ ತಲುಪಿತ್ತು ಎಂದು ಅವರು ನುಡಿದರು.

ಪರಿವಾರವಾದದ ರಾಜಕೀಯ ಮಾಡುವವರು ಪ್ರಜಾಪ್ರಭುತ್ವದ ಮುಖವಾಡ ತೊಡುತ್ತಾರೆ. ಆಂತರಿಕ ಪ್ರಜಾಪ್ರಭುತ್ವ ಇಲ್ಲದ ಹಾಗೂ ಸಾಮಥ್ರ್ಯ ಇರುವ ಕಾರ್ಯಕರ್ತನಿಗೂ ಅತ್ಯುನ್ನತ ಸ್ಥಾನ ನೀಡದ ಪಕ್ಷಗಳು ಪ್ರಜಾಪ್ರಭುತ್ವದ ಮುಖವಾಡ ಹಾಕಿ, ಎಲ್ಲರಿಗಿಂತ ಮೊದಲು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ ಎಂದು ಟೀಕಿಸಿದರು. ಅವರ ರಾಜಕೀಯ ಈಗ ಸಂಕಷ್ಟದಲ್ಲಿದೆ. ಕಾಂಗ್ರೆಸ್ ಒಳಗೆ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲ. ಆಂತರಿಕ ಪ್ರಜಾಪ್ರಭುತ್ವದ ಧ್ವನಿ ಎತ್ತಿದವರನ್ನು ಮೂಲೆಗುಂಪು ಮಾಡುವ ಕೆಲಸ ಕೌಟುಂಬಿಕವಾದಿಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ನುಡಿದರು.

ಬಾಲ ಸುಟ್ಟ ಬೆಕ್ಕಿನಂತಾದ ವಿರೋಧ ಪಕ್ಷಗಳು
ನ್ಯಾಷನಲ್ ಕಾನ್ಫರೆನ್ಸ್, ಆರ್‍ಜೆಡಿ, ಸಮಾಜವಾದಿ ಪಕ್ಷ, ಜೆಡಿಎಸ್ ಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಇವರೆಲ್ಲರೂ ಆಂತರಿಕ ಪ್ರಜಾಪ್ರಭುತ್ವದ ಕುರಿತು ಮಾತನಾಡುತ್ತಾರೆ. ಆದರೆ, ಬಿಜೆಪಿ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ವಿಕಾಸವಾದದ ಮೇಲೆ ನಂಬಿಕೆ ಇಟ್ಟು, ಆಮೌಲ್ಯಗಳನ್ನು ಪಕ್ಷದೊಳಗೆ ಮತ್ತು ಹೊರಗೆ ಅನುಷ್ಠಾನಕ್ಕೆ ತರುತ್ತಿದೆ. ಇದನ್ನು ಜನರೂ ಬೆಂಬಲಿಸಿ ಒಪ್ಪಿಕೊಂಡಿದ್ದಾರೆ. ಬಿಜೆಪಿಯ ಬೆಳವಣಿಗೆ ಜಾತಿವಾದಿ, ಪರಿವಾರವಾದಿ, ತುಷ್ಟೀಕರಣವಾದಿ ರಾಜಕಾರಣಕ್ಕೆ ಕೊಡಲಿ ಪೆಟ್ಟು ಹಾಕಿದೆ. ಅವರೆಲ್ಲ ಬಾಲ ಸುಟ್ಟ ಬೆಕ್ಕಿನಂತೆ ಚೀರಾಡುತ್ತಿದ್ದಾರೆ ಎಂದು ತಿಳಿಸಿದರು.

ಭಾರತ ಜಾಗತಿಕ ನಾಯಕನಾಗಿ ಕಠಿಣ ಸಂದರ್ಭಗಳಲ್ಲಿ ನಾಯಕತ್ವದ ಗುಣ ತೋರಿಸಿದ್ದು, ಜಗತ್ತಿನಲ್ಲಿ ನಾಯಕತ್ವದ ಸ್ಥಾನವನ್ನು ಪಡೆದಿದೆ ಎಂದು ವಿವರಿಸಿದರು.

ಇದೇ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಇದೇ 10ರಂದು ಎನ್‍ಡಿಎ ಬೆಂಬಲಿತ ನಮ್ಮ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಕರ್ನಾಟಕಕ್ಕೆ ಬರಲಿದ್ದಾರೆ ಎಂದರಲ್ಲದೆ, ಕೆಲವರಿಗೆ ಸಾಮಾಜಿಕ ನ್ಯಾಯ ಎಂಬುದು ಕೇವಲ ಘೋಷಣೆಯಾಗಿದೆ. ಆದರೆ, ಬಿಜೆಪಿಗೆ ಅದೊಂದು ಬದ್ಧತೆ. ಮೊದಲನೇ ಬಾರಿ ರಾಷ್ಟ್ರಪತಿ ಆಯ್ಕೆಯ ಅವಕಾಶ ಸಿಕ್ಕಿದಾಗ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ಆಯ್ಕೆ ಮಾಡಿದ್ದೆವು. ಕೆಲವು ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಇಡೀ ದೇಶದ ಜನ ಇದನ್ನು ಮೆಚಿಕೊಂಡಿದ್ದರು. ಕಲಾಂ ಅವರು ಆ ಸ್ಥಾನದ ಗೌರವ ಹೆಚ್ಚಿಸಿದ್ದರು ಎಂದು ವಿವರಿಸಿದರು.

ಮತ್ತೆ ಅವಕಾಶ ಲಭಿಸಿದಾಗ ದಲಿತ ವರ್ಗದ ರಾಮನಾಥ ಕೋವಿಂದ್ ಅವರನ್ನು ಮೋದಿಯವರ ನೇತೃತ್ವದ ಎನ್‍ಡಿಎ ಆಯ್ಕೆ ಮಾಡಿತ್ತು. ರಾಷ್ಟ್ರಪತಿ ಭವನ ವಿವಾದ, ಕಳಂಕವಿಲ್ಲದೆ 5 ವರ್ಷ ಪೂರ್ಣಗೊಂಡಿದೆ. ಈಗ ಆದಿವಾಸಿ ಸುಶಿಕ್ಷಿತ ಮಹಿಳೆ, ಬಡತನದ ನೋವನ್ನು ಅನುಭವಿಸಿ, ಕಷ್ಟಪಟ್ಟು ಓದಿ, ಶಾಸಕಿ, ಸಚಿವೆ ಮತ್ತು ರಾಜ್ಯಪಾಲರಾಗಿ ಅನುಭವದ ಗಣಿಯಾಗಿ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ. ಸಾಮಾಜಿಕ ನ್ಯಾಯ ನಮ್ಮ ಬದ್ಧತೆಯಾಗಿದ್ದು, ಅದನ್ನು ತೋರಿಸಿದ್ದೇವೆ ಎಂದು ತಿಳಿಸಿದರು. ಒಟ್ಟು ಮತಗಳನ್ನು ಗಮನಿಸಿದರೆ ನಮ್ಮ ಗೆಲುವು ಖಚಿತ ಎಂದರು. ಜೆಡಿಎಸ್ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಇಂಗಿತ ವ್ಯಕ್ತಪಡಿಸಿದ್ದು ಸ್ವಾಗತಾರ್ಹ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.

ಇ.ಡಿ, ಐಟಿ ದುರ್ಬಳಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಪ್ರಾಮಾಣಿಕರಿರುತ್ತಾರೋ ಅವರನ್ನು ಇ.ಡಿ, ಐಟಿ ಏನೂ ಮಾಡಲಾಗದು. ಯಾರು ಭ್ರಷ್ಟರೋ ಅವರು ಇ.ಡಿ, ಐಟಿಯಿಂದ ತಪ್ಪಿಸಿಕೊಳ್ಳಲಾಗದು. ಭ್ರಷ್ಟರಾದರೆ ಭಯಪಡಲೇ ಬೇಕು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಲಿದೆ ಎಂಬ ಸಮೀಕ್ಷೆ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ಖಾಲಿ ಡಬ್ಬ ಹೆಚ್ಚು ಶಬ್ದ ಮಾಡುತ್ತದೆ. ಉತ್ತರಾಖಂಡ್ ಚುನಾವಣೆಯಲ್ಲಿ ಗೆಲುವು ತಮ್ಮದೇ ಎಂದು ಭಾವಿಸಿದ್ದು ಯಾರು? ಗೋವಾದಲ್ಲಿ ಏನಾಯಿತು? ಪಂಜಾಬ್‍ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸ್ಥಿತಿ ಏನಾಗಿದೆ? ಯುಪಿಯಲ್ಲಿ ಮೈ ಲಡ್‍ಕೀ ಹೂಂ, ಮೈ ಲಡ್ ಸಖ್‍ತಾ ಹೈ ಎಂದು ಘೋಷಣೆ ಹಾಕಿ ನಾಟಕ ಮಾಡಿದ್ದೇ ಮಾಡಿದ್ದು. 399 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿ 387 ಸ್ಥಾನಗಳಲ್ಲಿ ಠೇವಣಿ ಕಳಕೊಂಡರು. ಹಾಗೇ ಕಾಂಗ್ರೆಸ್ ಇಲ್ಲೂ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ಹೇಳುವುದಕ್ಕೆ ಉಲ್ಟಾ ಆಗುವುದು ಐತಿಹಾಸಿಕ ಸತ್ಯ ಎಂದು ತಿಳಿಸಿದರು.

ಅವರು ಸಿದ್ದರಾಮೋತ್ಸವ ಮಾಡಿದರೆ, ನಾವು ಭಾರತದ ಉತ್ಸವ ಮಾಡಿ ದೇಶದ ಪ್ರಶಂಸೆ ಮಾಡಲು ಮುಂದಾಗಿದ್ದೇವೆ. ಆಚರಣೆಗೆ ನಾವು ಬೇಡ ಎನ್ನುವುದಿಲ್ಲ. ಕಾಮೆಂಟ್ಸ್ ಕೂಡ ಇಲ್ಲ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ಬಿಜೆಪಿ ಚುನಾವಣೆ ನಾಯಕತ್ವದ ಕುರಿತು ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸಲಿದೆ ಎಂದೂ ಅವರು ತಿಳಿಸಿದರು. ವಿಕಾಸವಾದ ಮತ್ತು ರಾಷ್ಟ್ರವಾದದ ಜೊತೆ ನಾವು ನಾವು ಚುನಾವಣೆಗೆ ಹೋಗಲಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷದವರು ಏನೇ ಮಾಡಿದರೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಜಾತಿವಾದ, ಪರಿವಾರವಾದ, ಭ್ರಷ್ಟಾಚಾರ, ಓಲೈಕೆ ರಾಜಕೀಯದಿಂದ ದೇಶದ ಒಟ್ಟು ರಾಜಕೀಯ ಪರಿಸ್ಥಿತಿಯೇ ಕಾಂಗ್ರೆಸ್ ಕುಸಿತಕ್ಕೆ ಕಾರಣ. ಈ ನೀತಿಯನ್ನು ಬದಲಿಸಿಕೊಳ್ಳದೆ ಹಳೆ ವೈಭವ ಗಳಿಸುವುದು ಕಷ್ಟದ ಕೆಲಸ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಚುನಾವಣೆ ಬಂದಾಗಲೆಲ್ಲ ಕಾಂಗ್ರೆಸ್‍ನವರಿಗೆ ದಲಿತ ಸಿಎಂ ನೆನಪಾಗುತ್ತದೆ. ಡಾ. ಪರಮೇಶ್ವರ್ ಸೋಲಿಗೆ ಅವರ ಆಂತರಿಕ ಜಗಳವೇ ಕಾರಣ ಎಂದರು.

ಕಾಂಗ್ರೆಸ್‍ಗೆ ಮೋದಿ ಫೋಬಿಯಾ
ಮೋದಿಯವರ 8 ವರ್ಷಗಳ ಆಡಳಿತ ಕುರಿತು ಸಿದ್ದರಾಮಯ್ಯರು ಬಿಡುಗಡೆ ಮಾಡಿದ ಕಿರುಹೊತ್ತಗೆಯ ಅವಲೋಕನ ಮಾಡಿದ್ದೇನೆ. ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಅವಲೋಕನದ ಬಳಿಕ ಅನಿಸಿದೆ. ಕಾಂಗ್ರೆಸ್‍ಗೆ ಮೋದಿ ಫೋಬಿಯಾ ಹಿಡಿದಿದೆ. ಮೋದಿಯವರು ಏನು ಮಾಡಿದರೂ ವಿರೋಧಿಸುವ ಕಾಯಿಲೆ. ಜನರು ಮೋದಿಯವರ ನಾಯಕತ್ವಕ್ಕೆ ಬೆಂಬಲಿಸಿ ಹೆಚ್ಚು ಸೀಟು ಕೊಡುತ್ತಲೇ ಹೋಗಿದ್ದಾರೆ ಎಂದು ನುಡಿದರು.

ಬಿಜೆಪಿಯಲ್ಲಿ ಆನ್‍ಲೈನ್ ಸದಸ್ಯತ್ವ ಅವಕಾಶ ಇದೆ. ನಮ್ಮದು ಮಾಸ್ ಪಾರ್ಟಿ. ಬರಬೇಕಾದರೆ ಕಸಕಡ್ಡಿಯೂ ಬರುತ್ತದೆ. ಬಳಿಕ ಅದು ಬದಿಗೆ ಸರಿಯುತ್ತದೆ. ಜೊತೆಗೇ ವಿಮಾನನಿಲ್ದಾಣಕ್ಕೆ ತೆರಳಿ ಸೆಲ್ಫಿ ಪಡೆದೊಡನೆ ಪಕ್ಷದ ಜೊತೆ ನಂಟಿದೆ ಎನ್ನಲಾಗುವುದಿಲ್ಲ ಎಂದು ಕೊಲೆಗಾರರ ಜೊತೆಗಿನ ನಂಟಿನ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು. ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ. ನಾವು ಭಯೋತ್ಪಾದಕರನ್ನು ಶೂನ್ಯ ಸಹಿಷ್ಣುತೆಯಿಂದ ನೋಡುತ್ತೇವೆ ಎಂದು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಜಡತ್ವದ, ಭ್ರಷ್ಟ ಮತ್ತು ಜನವಿರೋಧಿ ಆಡಳಿತದ ಕೊನೆಯಾಗಿದೆ. ದೇಶದ್ರೋಹಿ, ಭಯೋತ್ಪಾದಕ ದಾವೂದ್ ಇಬ್ರಾಹಿಂ ಜೊತೆ ವ್ಯವಹರಿಸಿದ ವ್ಯಕ್ತಿಯೂ ಅಘಾಡಿ ಸರಕಾರದ ಸಂಪುಟದಲ್ಲಿದ್ದರು. ಮಹಾರಾಷ್ಟ್ರದ ಸ್ವಾಭಿಮಾನಕ್ಕೆ ಧಕ್ಕೆ ತರುವ ಸಂಗತಿ ಇದಾಗಿತ್ತು. ಈಗ ಬಿಜೆಪಿ- ಏಕನಾಥ ಶಿಂಧೆ ನೇತೃತ್ವದ ಸರಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿದೆ. ಪಕ್ಷ ವಿಕಾಸವಾದ- ರಾಷ್ಟ್ರವಾದದಲ್ಲಿ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಪಕ್ಷ ವ್ಯಾವಹಾರಿಕವಾಗಿ ಹಿಂದೆಯೂ ರಾಜಿ ಮಾಡಿಕೊಂಡಿತ್ತು. ಅಂತೆಯೇ ಶಿಂಧೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಯಾವ ಸಂದರ್ಭದಲ್ಲೂ ಕಾಂಗ್ರೆಸ್ ಜೊತೆ ಸೇರುವುದಿಲ್ಲ ಎಂಬ ಬಾಳಾ ಠಾಕ್ರೆ ಅವರ ಮಾತಿಗೆ ವಿರುದ್ಧವಾಗಿ ಉದ್ಧವ್ ಠಾಕ್ರೆ ಹೋದರು. ಇತಿಹಾಸದಲ್ಲಿ ಇದೊಂದು ಕಪ್ಪುಚುಕ್ಕಿ ಎಂದು ನುಡಿದರು.

ಶಿವಸೇನಾದ ಉದ್ಧವ್ ಠಾಕ್ರೆಯವರ ಪಾಪದ ಕೊಡ ತುಂಬಿತ್ತು. ಇದೀಗ ಹೊಸ ರಾಜಕಾರಣ ಆರಂಭವಾಗಿದೆ. ಅಭಿವೃದ್ಧಿ ಯೋಜನೆ ಅನುಷ್ಠಾನ, ರಾಷ್ಟ್ರೀಯವಾದಿ ಚಿಂತನೆಗೆ ಬೆಂಬಲ ನೀಡುವ ಮೂಲಕ ಜನರ ವಿಶ್ವಾಸವನ್ನು ಹೊಸ ಸರಕಾರ ಗೆಲ್ಲಲಿದೆ ಎಂದು ಅಭಿಪ್ರಾಯಪಟ್ಟರು.

ದೇವಾನುದೇವತೆಗಳ ಅಪಮಾನಕ್ಕೆ ಆಕ್ಷೇಪ
ಕೆನಡಾದಲ್ಲಿ ಚಲನಚಿತ್ರೋತ್ಸವದಲ್ಲಿ “ಕಾಳಿ” ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದು, ಕಾಳಿ ಮಾತೆ ಸಿಗರೇಟ್ ಸೇದುವ ಚಿತ್ರವಿದೆ ಎಂದು ಪತ್ರಕರ್ತರು ಗಮನ ಸೆಳೆದಾಗ, “ನನಗೆ ಮಾಹಿತಿ ಇಲ್ಲ. ಆದರೆ, ಆ ರೀತಿ ನಮ್ಮ ದೇವಾನುದೇವತೆಗಳನ್ನು ಅಪಮಾನಿಸುವ ಕೆಲಸ ಮಾಡುವುದು ಎಷ್ಟು ಸೂಕ್ತ?” ಎಂದು ಕೇಳಿದರು. ನಾವು ಬೇರೆಯವರಂತೆ ರೊಚ್ಚಿಗೇಳಲ್ಲ ಎಂಬುದು ನಮ್ಮ ದೌರ್ಬಲ್ಯ ಎಂದು ಭಾವಿಸಬಾರದು. ಆ ನಿರ್ಮಾಪಕರು ಮತ್ತು ನಿರ್ದೇಶಕರು ತಕ್ಷಣ ತಮ್ಮ ನಿಲುವನ್ನು ಬದಲಿಸಬೇಕು. ಇಲ್ಲದಿದ್ದರೆ ನಾವು ಕಾನೂನಾತ್ಮಕವಾಗಿ ನಮ್ಮ ಧರ್ಮದ ಪರಂಪರೆ ಉಳಿಸಲು ಹೋರಾಡಲಿದ್ದೇವೆ ಎಂದು ತಿಳಿಸಿದರು.

ದತ್ತಪೀಠದ ಕುರಿತಂತೆ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಅವರು ಸ್ವಾಗತಿಸಿದರು. ಜಿಲ್ಲಾಡಳಿತ ಆದಷ್ಟು ಬೇಗ ಅಲ್ಲಿ ಅರ್ಚಕರನ್ನು ನೇಮಿಸಲು ಅವರು ವಿನಂತಿಸಿದರು. ರಾಜ್ಯ ವಕ್ತಾರ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *