Notice: Function _load_textdomain_just_in_time was called incorrectly. Translation loading for the og domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wp-post-author domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121
ಶಿವಮೊಗ್ಗದಲ್ಲಿ ಕೌಶಲ್ಯ ತರಬೇತಿ ಕೇಂದ್ರ ಮತ್ತು ಮಹಿಳಾ ವಸತಿ ನಿಲಯದ ಶಂಕುಸ್ಥಾಪನೆ ಮಾಡಿದ ಸಚಿವ ಈಶ್ವರಪ್ಪ – I am BJP
May 7, 2025

ಶಿವಮೊಗ್ಗದಲ್ಲಿ ಕೌಶಲ್ಯ ತರಬೇತಿ ಕೇಂದ್ರ ಮತ್ತು ಮಹಿಳಾ ವಸತಿ ನಿಲಯದ ಶಂಕುಸ್ಥಾಪನೆ ಮಾಡಿದ ಸಚಿವ ಈಶ್ವರಪ್ಪ

ಇಂದು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪ ಅವರು ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ ನಿರ್ಮಾಣವಾಗುತ್ತಿರುವ ಕೌಶಲ್ಯ ತರಬೇತಿ ಕೇಂದ್ರ ಮತ್ತು ಮಹಿಳಾ ವಸತಿ ನಿಲಯದ ಶಂಕುಸ್ಥಾಪನೆ ಮಾಡಿದರು.

ನಂತರ ಸಭೆಯಲ್ಲಿ ಮಾತನಾಡಿದ ಸಚಿವರು ಮಹಿಳಾ ಸಂಘಟನೆಗಳು ಸದೃಢವಾಗಬೇಕಂದರೆ ಹೀಗೆ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದರನೇ ಅನುಕೂಲ ಆಗುತ್ತದೆ. ಇದು ಶಿವಮೊಗ್ಗದಲ್ಲೇ ಪ್ರಪ್ರಥಮಬಾರಿಗೆ ಸ್ಥಾಪನೆ ಆಗುತ್ತಿರುವುದು ನಮ್ಮ ಜಿಲ್ಲೆಯ ಹೆಮ್ಮೆಯ ವಿಷಯವೇ ಸರಿ.

ಇನ್ನೂ ಮಹಿಳಾ ವಸತಿ ನಿಲಯ ಸ್ಥಾಪನೆ ಮಾಡಲು ಹೊರಟಿದ್ದೀರಿ ಇಂದಿನ ಮುಂದುವರೆದ ದಿನಮಾನಗಳಲ್ಲಿ ಮಹಿಳೆಯರು ಸ್ವಾಲಂಬಿಗಳಾಗಲು ಅನುಕೂಲ ಆಗುವ ನಿಟ್ಟಿನಲ್ಲಿ ಈ ರೀತಿ ದಿಟ್ಟ ಹೆಜ್ಜೆಗಳನ್ನು ಇಡುತ್ತಿರುವುದು ಸಂತೋಷದ ವಿಷಯ. ಇದನ್ನು ಮಾಡಲು ಮನಸ್ಸು ಮಾಡಿ ಎಲ್ಲರೂ ಒಕ್ಕಟ್ಟಾಗಿ ಕೆಲಸ ಮಾಡುವುದರಿಂದ ಬೇಗ ನಿಮ್ಮ ಕನಸುಗಳು ನನಸಾಗುವದರಲ್ಲಿ ಸಂಶಯವಿಲ್ಲ.

ಈ ಯೋಜನೆಗಳ ಪ್ಲ್ಯಾನ್, ತಗಲುವ ವೆಚ್ಚ ಮತ್ತು ಇನ್ನಿತರ ಮಾಹಿತಿಗಳನ್ನು ನಮಗೆ ಕೊಡಿ, ಇಲ್ಲಿರುವ ನಾವೆಲ್ಲ ಸೇರಿ ಪಕ್ಷಭೇದ ಮರೆತು ನಿಮ್ಮ ಸಂಸ್ಥೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕೆಲಸ ಕಾರ್ಯ ಮಾಡುತ್ತೇವೆ ಎಂದು ತಿಳಿಸಲು ಬಯಸುತ್ತೇವೆ. ನೀವು ಕೈಗೊಂಡಿರುವ ಕೆಲಸ ಆದಷ್ಟು ಬೇಗ ಮುಗಿಬೇಕಂದ್ರೆ ನೀವು ಅದು ಮುಗಿಯುವವೆಗೂ ಸುಮ್ಮನೇ ಕೂತುಕೊಬಾರದು ಎಲ್ಲರ ಬೆನ್ನತ್ತಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಿ ಎಂದು ತಿಳಿಸಿದರು.

ಸಮಾರಂಭದಲ್ಲಿ ಸಂಸದರಾದ ಶ್ರೀ ಬಿ. ವೈ .ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಶ್ರೀ ರುದ್ರೇಗೌಡರು, ವಿಧಾನಪರಿಷತ್ ಸದಸ್ಯರಾದ ಶ್ರೀ ಪ್ರಸನ್ನಕುಮಾರ್ ಅವರು ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *